ಎಲ್ಲರಿಗೂ ನಮಸ್ಕಾರ, ಭಾರತದಲ್ಲಿ ಅತಿ ಹೆಚ್ಚಾಗಿ ಕಾಡುವ ಕಾಯಿಲೆಗಳು ಅಂದ್ರೆ ಅದು ಶುಗರ್ ಮತ್ತು ಬಿಪಿ ಇವುಗಳ ನಿಯಂತ್ರಣಕ್ಕಾಗಿ ಜನರು ಅರಸಾಹಸ ಪಡುತ್ತಾರೆ. ಮಾತ್ರೆಗಳಿಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ ಇದಕ್ಕೆ ಸರಿಯಾದ ಆಹಾರ ಕ್ರಮ ಇಲ್ಲದೆ ಇರೋದೇ ಪ್ರಮುಖ ಕಾರಣ ಈ ಎರಡು ಕಾಯಿಲೆಯನ್ನು ನಾವು ನಿತ್ಯ ಬಳಸುವ ತರಕಾರಿಯಲ್ಲಿಯೇ ಮಣಿಸಬಹುದು.
ಈ ಐದು ತರಕಾರಿಗಳನ್ನು ನಿತ್ಯ ಸೇವಿಸುವುದು ಉತ್ತಮ:
ಆ ನಿಟ್ಟಿನಲ್ಲಿ ಈ ಐದು ತರಕಾರಿಗಳನ್ನು ನಿತ್ಯ ಸೇವಿಸುವುದರಿಂದಲೂ ಕೂಡ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸಬಹುದು ಮಧುಮೇಹ ರಕ್ತದೊತ್ತಡ ನಿಯಂತ್ರಣಕ್ಕೆ ಟಿಪ್ಸ್ ಈ ಐದು ತರಕಾರಿ ಸೇವಿಸಿ ಶುಗರ್ ಬಿಪಿ ಕಂಟ್ರೋಲ್ ಮಾಡಿ ಒತ್ತಡಗಳ ಪ್ರಪಂಚ ಇದು ನಿತ್ಯ ಒಂದಿಲ್ಲೊಂದು ಗೋಳಿನಲ್ಲಿಯೇ ಜೀವನ ಸಾಗುತ್ತಲೇ ಇರುತ್ತದೆ ಇದರ ಪರಿಣಾಮವಾಗಿಯೇ ಸದ್ಯ ಹಲವು ರೋಗಗಳ ಮಾಲಿಕರು ನಾವಾಗುತ್ತಿದ್ದೇವೆ.
ಅದರಲ್ಲೂ ಪ್ರಮುಖವಾಗಿ ಭಾರತದಲ್ಲಿ ಅತಿ ಹೆಚ್ಚಾಗಿ ಕಾಡುವ ಕಾಯಿಲೆಗಳು ಅಂದ್ರೆ ಅದು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಇವುಗಳ ನಿಯಂತ್ರಣಕ್ಕಾಗಿ ಜನರು ಸಾಹಸ ಪಡುತ್ತಾರೆ ಮಾತ್ರೆಗಳಿಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ ಇದಕ್ಕೆ ಸರಿಯಾದ ಆಹಾರ ಕ್ರಮ ಇಲ್ಲದೆ ಇರೋದೇ ಪ್ರಮುಖ ಕಾರಣ ನಮ್ಮ ಆರೋಗ್ಯದ ಮೇಲೆ ನಾವು ಸೇವಿಸುವಂತಹ ಆಹಾರ ಹಾಗೆ ಮಾಡುವ ನಿತ್ಯ ವ್ಯಾಯಾಮಗಳು ಕೂಡ ಬಹಳ ಪರಿಣಾಮ ಬೀರುತ್ತವೆ ಹೀಗಾಗಿ ಈ ಎರಡು ಕಾಯಿಲೆಯನ್ನು ನಾವು ನಿತ್ಯ ಬಳಸುವ ತರಕಾರಿಯಿಂದಲೇ ಸೋಲಿಸಬಹುದು.
ಆ ನಿಟ್ಟಿನಲ್ಲಿ ಐದು ಪ್ರಮುಖ ತರಕಾರಿಯನ್ನ ನಿತ್ಯ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಹಾಗೂ ಬಿಪಿ ನಿಯಂತ್ರಣಕ್ಕೆ ಬರುತ್ತೆ ಯಾವುದವು ಆ ಪ್ರಮುಖ ಐದು ತರಕಾರಿಗಳು ಅಂತಲೇ ತೋರಿಸ್ತಾ ಹೋಗ್ತೀವಿ ನೋಡಿ ಮೊದಲಿಗೆ ಹಾಗಲಕಾಯಿ ಹಾಗಲಕಾಯಿಯಲ್ಲಿ ಚರಂಟಿನ್ ಹಾಗೂ ಪಾಲಿಪೆಪ್ಟಿಡ್ ಪಿ ಎಂಬ ವಿರಳವಾದ ಪೋಷಕಾಂಶಗಳು ಇರುತ್ತವೆ ಈ ಅಂಶಗಳು ನಮ್ಮ ದೇಹದಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡವನ್ನು ಕಡಿಮೆ ಮಾಡುವ ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿರುತ್ತವೆ.
ಈ ಒಂದು ತರಕಾರಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಇನ್ನು ಪಾಲಕ್ ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ಮೆಗ್ನಿಷಿಯಂ ಹಾಗೂ ಫೈಬರ್ ಅಂಶಗಳು ಇರುತ್ತವೆ ಇದು ಸಕ್ಕರೆ ಕಾಯಿಲೆಯನ್ನ ಗುಣಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಅದರಲ್ಲೂ ಇನ್ಸುಲಿನ್ ಸೆನ್ಸಿಟಿವಿಟಿ ಕಡಿಮೆ ಮಾಡುವುದರಲ್ಲಿ ಪಾಲಕ್ ಸೊಪ್ಪು ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ ಇನ್ನು ಬೆಂಡೆಕಾಯಿ ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶವಿದೆ ಇದು ರಕ್ತದಲ್ಲಿ ಗ್ಲುಕೋಸ್ ಬಿಡುಗಡೆಯಾಗುವುದನ್ನ ಕಡಿಮೆ ಮಾಡುತ್ತೆ ಇದರಿಂದ ಸರಳವಾಗಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತೆ.
ಇನ್ನು ಕೋಸುಗಡ್ಡೆ ಕೋಸುಗಡ್ಡೆಯಲ್ಲಿ ಸಲ್ಫೋರಾಫಿನ್ ಎಂಬ ಅಪರೂಪದ ಅಂಶವಿರುತ್ತೆ ಇದನ್ನ ಆಂಟಿ ಕ್ಯಾನ್ಸರ್ ಅಂಶ ಅಂತಲೂ ಕೂಡ ಕರೆಯಲಾಗುತ್ತೆ ಕೋಸುಗಡ್ಡೆಯನ್ನ ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ಇನ್ಸುಲಿನ್ ಸೆನ್ಸಿಟಿವಿಟಿಯನ್ನ ಕಡಿಮೆ ಮಾಡುತ್ತೆ ದಿನದಿಂದ ದಿನಕ್ಕೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡವು ಕಡಿಮೆಯಾಗುತ್ತೆ ಇನ್ನು ಗೆಣಸು ಸಿಹಿ ಆಲೂಗಡ್ಡೆ ಅಂತಲೂ ಕರೆಸಿಕೊಳ್ಳುವ ಈ ಗೆಣಸಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಂದ್ರೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಂಶ ತೀರಾ ಅಂದ್ರೆ ತೀರಾ ಕಡಿಮೆ ಇರುತ್ತೆ. ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಬಿಡುಗಡೆಯಾಗುವುದು ಕೂಡ ಕಡಿಮೆಯಾಗಿ ಸಕ್ಕರೆ ಕಾಯಿಲೆಯಿಂದ ನಾವು ದೂರ ಉಳಿಯುತ್ತೆ ಹೀಗಾಗಿ ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡ ನಿಯಂತ್ರಣಕ್ಕೆ ಈ ಐದು ತರಕಾರಿಯನ್ನ ನಿಯಮಿತವಾಗಿ ತಪ್ಪದೆ ಸೇವಿಸಿ.
ಇದನ್ನೂ ಓದಿ: Pan Card 2.0 Update.!





