ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ: ರಾಜಕೀಯದ ಹೊಸ ಡೆಫಿನಿಷನ್! ಕಂಪ್ಲೀಟ್ ಮಾಹಿತಿ ಇಲ್ಲಿದೆ!

December 22, 2025 6:19 AM

ರಿಯಲ್ ಸ್ಟಾರ್ ಉಪೇಂದ್ರ, ಕನ್ನಡ ಸಿನಿಮಾರಂಗದಲ್ಲಿ ಕ್ರಾಂತಿಕಾರಿ ನಿರ್ದೇಶಕ ಅಂದ್ರೆ ಅಚ್ಚರಿಯಿಲ್ಲ. ಆದರೆ, ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಲೂ ಒಂದು ಹೊಸ ಅಲೆಯನ್ನೇ ಸೃಷ್ಟಿ ಮಾಡಿದರು. 2017ರಲ್ಲಿ ಕೆಪಿಜೆಪಿ ಜೊತೆ ಶುರುವಾದ ಅವರ ಜರ್ನಿ, ನಂತರ ‘ಉತ್ತಮ ಪ್ರಜಾಕೀಯ ಪಕ್ಷ’ದ (UPP) ಹುಟ್ಟಿಗೆ ಕಾರಣವಾಯಿತು. ‘ಪ್ರಜಾಕೀಯ’ ಅಂದ್ರೆ ಬರೀ ಒಂದು ರಾಜಕೀಯ ಪಕ್ಷ ಅಲ್ಲ, ಅದು ಒಂದು ಹೊಸ ಐಡಿಯಾಲಜಿ. ರಾಜಕೀಯದ ಗೊಂದಲಗಳ ನಡುವೆ, ಪ್ರಜಾಕೀಯದ ಅಸಲಿ ಅರ್ಥ ಏನು ಅನ್ನೋದನ್ನ ಇವತ್ತು ‘ಬೆಳಗಾವಿ ವಾಯ್ಸ್’ನಲ್ಲಿ ನೋಡೋಣ.

ಉಪೇಂದ್ರ ರಾಜಕೀಯದ ಮೊದಲ ಹೆಜ್ಜೆ: ಕೆಪಿಜೆಪಿ ಕಥೆ

2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ‘ (KPJP) ಸೇರಿಕೊಂಡಾಗ, ಇಡೀ ರಾಜ್ಯದ ಜನರಲ್ಲಿ ಕುತೂಹಲ ಮೂಡಿತ್ತು. ತುಂಬಾ ಕಡೆ ಕಾರ್ಯಕ್ರಮಗಳು, ಅನೌನ್ಸ್‌ಮೆಂಟ್‌ಗಳು ನಡೆದವು. ಜನರಲ್ಲೂ ಕೆಪಿಜೆಪಿ ಪಕ್ಷ ಪಾಪ್ಯುಲರ್ ಆಗೋಕೆ ಶುರುವಾಯ್ತು.

ಮುಂದೆ ಬರುವ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಈ ಪಕ್ಷ ಬೇರೆ ಪಕ್ಷಗಳಿಗೆ ದೊಡ್ಡ ತಲೆನೋವು ಆಗಬಹುದು ಅಂತ ಎಲ್ಲರೂ ಮಾತಾಡ್ಕೊಳ್ತಿದ್ರು. ಉಪ್ಪಿ ಸರ್ ಜಾಯಿನ್ ಆಗಿದ್ದರಿಂದಲೇ ಕೆಪಿಜೆಪಿಗೆ ಸಿಕ್ಕಾಪಟ್ಟೆ ಅಡ್ವಾಂಟೇಜ್ ಸಿಕ್ಕಿತ್ತು, ಫ್ರೀ ಮೀಡಿಯಾ ಅಟೆನ್ಶನ್ ಕೂಡ ಜಾಸ್ತಿ ಆಯ್ತು.

ಕೆಪಿಜೆಪಿ ತೊರೆದಿದ್ದು ಏಕೆ? ಟಿಕೆಟ್ ಹಂಚಿಕೆ ಗೊಂದಲಗಳು

ಕೆಪಿಜೆಪಿ ಸೇರಿ ಕೆಲವೇ ತಿಂಗಳುಗಳಲ್ಲಿ ಉಪ್ಪಿ ಸರ್ ಆ ಪಾರ್ಟಿನ ಬಿಟ್ಟು ಹೊರಬಂದರು. ತಾವು ಮತ್ತು ಕೆಲವರು ರಾಜೀನಾಮೆ ಕೊಟ್ಟಿದ್ದಾಗಿ ಅನೌನ್ಸ್ ಮಾಡಿದರು. ಆದರೆ ಯಾವ ಕಾರಣಕ್ಕೆ ಬಿಟ್ಟರು ಅಂತ ಎಲ್ಲೂ ಓಪನ್ ಆಗಿ ಹೇಳಲಿಲ್ಲ. ರೂಮರ್ಸ್ ಏನು ಅಂದ್ರೆ, ಕೆಪಿಜೆಪಿ ಹೈಕಮಾಂಡ್‌ನವರು ಎಂಎಲ್ಎ ಟಿಕೆಟ್ಸ್‌ಗಳನ್ನು ದುಡ್ಡುಸ್ಕೊಂಡು ಹಂಚುತ್ತಾ ಇದ್ರು. ಇದು ಉಪೇಂದ್ರರ ಪ್ರಜಾಕೀಯ ಐಡಿಯಾಲಜಿಗೆ ವಿರುದ್ಧವಾಗಿತ್ತು. ಅವರ ವಿಚಾರಗಳಿಗೆ ಹೊಂದಿಕೊಳ್ಳದ ಕಾರಣವೇ ಅವರು ಆ ಪಕ್ಷದಿಂದ ಹೊರನಡೆದರು ಅಂತ ಹೇಳಲಾಗುತ್ತೆ.

ಯುಪಿಪಿ ಹುಟ್ಟು: ಪ್ರಜಾಕೀಯದ ಕನಸು

ಕೆಪಿಜೆಪಿ ಪಕ್ಷದಿಂದ ಹೊರಬಂದ ಮೇಲೆ, 2018ರ ಸೆಪ್ಟೆಂಬರ್ 18ರಂದು, ತಮ್ಮ 50ನೇ ಬರ್ತ್‌ಡೇ ದಿನ ಉಪೇಂದ್ರ ಅವರು ತಮ್ಮದೇ ಆದ ಒಂದು ಪೊಲಿಟಿಕಲ್ ಪಾರ್ಟಿ ಶುರು ಮಾಡಿದರು. ಅದೇ ‘ಉತ್ತಮ ಪ್ರಜಾಕೀಯ ಪಕ್ಷ’ (UPP). ಈ ಪಕ್ಷ ಸಂಪೂರ್ಣವಾಗಿ ‘ಪ್ರಜಾಕೀಯ’ ಅನ್ನೋ ಐಡಿಯಾಲಜಿ ಮೇಲೆ ನಿಂತಿದೆ.

ಇಲ್ಲಿ ಪ್ರಜೆಗಳೇ ಪ್ರಭುಗಳು, ರಾಜಕಾರಣಿಗಳು ಸೇವಕರು ಅನ್ನೋ ಕಾನ್ಸೆಪ್ಟ್ ಇದೆ. ಜನರಿಗೆ ನಿಜವಾದ ಅಧಿಕಾರ ಕೊಡಬೇಕು ಅನ್ನೋದು ಈ ಪಕ್ಷದ ಮುಖ್ಯ ಉದ್ದೇಶ.

ಟೂ-ಪಾರ್ಟಿ ಥಿಯರಿ: ಕರ್ನಾಟಕಕ್ಕೆ ಅನ್ವಯಿಸೋದು ಹೇಗೆ?

ನೋಡಿ, ಅಮೆರಿಕಾದಲ್ಲಿ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಅಂತ ಬರೀ ಎರಡು ಮೇಜರ್ ಪಕ್ಷಗಳಿವೆ. ನಮ್ಮ ದೇಶದಲ್ಲೂ ಈಗ ಹಾಗೆಯೇ ಆಗಿದೆ – ಬಿಜೆಪಿ ಮತ್ತು ಕಾಂಗ್ರೆಸ್. ನಮ್ಮ ಸ್ಟೇಟ್‌ನಲ್ಲೂ ಸಿಎಂ ಆಗಬೇಕಂದ್ರೆ, ಇವೆರಡು ಪಕ್ಷಗಳಿಂದಲೇ ಯಾರಾದ್ರೂ ಒಬ್ಬರು ಆಗಬೇಕು ಅನ್ನೋ ಮೈಂಡ್‌ಸೆಟ್ ಇದೆ. ಜನರಿಗೆ ಬೇರೆ ಆಪ್ಶನ್‌ಗಳೇ ಇಲ್ಲ ಅನ್ನೋ ಫೀಲಿಂಗ್ ಬರ್ತಿದೆ. ಇಬ್ಬರಿಗೂ ಸಾಕಷ್ಟು ಅವಕಾಶ ಸಿಕ್ಕಿದ್ರೂ, ಹೇಳಿಕೊಳ್ಳುವಂತಹ ಬದಲಾವಣೆ ಏನು ಬಂದಿಲ್ಲ ಅಂತ ಜನರು ಬೇಸತ್ತಿದ್ದಾರೆ, ಒಂದು ಚೇಂಜ್ ಎಕ್ಸ್‌ಪೆಕ್ಟ್ ಮಾಡ್ತಿದ್ದಾರೆ.

ಪ್ರಜಾಕೀಯದ ವೋಟ್‌ಗಳು: ನಿಜವಾದ ಅರ್ಥವೇನು?

  • ಒಂದಿಷ್ಟು ಜನ ಉಪೇಂದ್ರ ಸರ್ ಫ್ಯಾನ್ಸ್.
  • ಇನ್ನೊಂದಿಷ್ಟು ಜನ ಟೂ-ಪಾರ್ಟಿ ಥಿಯರಿಯಿಂದ ಬೇಸತ್ತು, ಚೇಂಜ್ ಬೇಕು ಅಂತ ವೋಟ್ ಹಾಕಿದವರು.
  • ತುಂಬಾ ಕಡಿಮೆ ಜನರಿಗೆ ಮಾತ್ರ ಪ್ರಜಾಕೀಯದ ನಿಜವಾದ ಐಡಿಯಾಲಜಿ ಬಗ್ಗೆ ಗೊತ್ತಿತ್ತು.

“ಪ್ರಜಾಕೀಯಕ್ಕೆ ವೋಟ್ ಹಾಕಬೇಡಿ”: ಉಪ್ಪಿಯ ಟ್ವೀಟ್‌ನ ಹಿಂದಿನ ಅರ್ಥ

ಲಾಸ್ಟ್ ಎಲೆಕ್ಷನ್‌ನ ಮೊದಲು ಉಪೇಂದ್ರ ಸರ್ ಒಂದು ಟ್ವೀಟ್ ಮಾಡಿದ್ರು – “ನಿಮಗೆ ಪ್ರಜಾಕೀಯ ಐಡಿಯಾಲಜಿ ಗೊತ್ತಿಲ್ಲ ಅಂದ್ರೆ, ದಯವಿಟ್ಟು ನಮಗೆ ವೋಟ್ ಹಾಕಬೇಡಿ.” ಇದು ನಿಜವಾಗ್ಲೂ ತುಂಬಾ ಟ್ರೂ ಮಾತು. ಪ್ರಜಾಕೀಯ ಕಾನ್ಸೆಪ್ಟ್ ಗೊತ್ತಿಲ್ಲದೆ ವೋಟ್ ಹಾಕಿದ್ರೆ ಅದು ವೇಸ್ಟ್. ಇನ್ ಕೇಸ್ ಆ ರೀತಿ ವೋಟ್ ಹಾಕಿ, ಪ್ರಜಾಕೀಯ ಪಕ್ಷದಿಂದ ಯಾರಾದ್ರೂ ಗೆದ್ದುಬಿಟ್ಟರೆ, ಆಮೇಲೆ ದೊಡ್ಡ ಪ್ರಾಬ್ಲಂ ಆಗುತ್ತೆ. ಯಾಕಂದ್ರೆ ಪ್ರಜಾಕೀಯ ಅಂದ್ರೆ ಸುಮ್ನೆ ವೋಟ್ ಹಾಕಿ ಮಲಗೋದಲ್ಲ, ಅದರಲ್ಲಿ ಪ್ರಜೆಗಳ ರೆಸ್ಪಾನ್ಸಿಬಿಲಿಟಿ ತುಂಬಾ ಇದೆ.

ಪ್ರಜಾಪ್ರಭುತ್ವದ ಎರಡು ಮುಖಗಳು: ರಾಜಕೀಯ Vs ಪ್ರಜಾಕೀಯ

ನಮ್ಮ ಭಾರತದಲ್ಲಿ ನಾವು ಫಾಲೋ ಮಾಡೋದು ‘ಇನ್‌ಡೈರೆಕ್ಟ್ ಡೆಮಾಕ್ರೆಸಿ’ ಅಥವಾ ‘ರೆಪ್ರೆಸೆಂಟೇಟಿವ್ ಡೆಮಾಕ್ರೆಸಿ’. ಇಲ್ಲಿ ನಾವು ವೋಟ್ ಹಾಕಿ ಲೀಡರ್ಸ್‌ಗಳನ್ನು ಚೂಸ್ ಮಾಡ್ತೀವಿ. ಆಮೇಲೆ ನಮ್ಮ ಕೆಲಸ ಮುಗಿಯಿತು. ಗೆದ್ದ ಲೀಡರ್‌ಗಳು ಸೇರಿಕೊಂಡು ಸರ್ಕಾರ ರಚಿಸುತ್ತಾರೆ ಮತ್ತು ತಮಗೆ ಸರಿ ಅನಿಸಿದ್ದನ್ನು ಮಾಡುತ್ತಾರೆ.

ಆದರೆ, ‘ಡೈರೆಕ್ಟ್ ಡೆಮಾಕ್ರೆಸಿ’ ಅಥವಾ ‘ಪ್ರಜಾಕೀಯ’ದಲ್ಲಿ ಹಾಗಿಲ್ಲ. ಲೀಡರ್ ಗೆದ್ದರೂ, ತಾನು ರಾಜ ಅಂತ ಅಂದುಕೊಳ್ಳುವ ಹಾಗಿಲ್ಲ. ಯಾವುದೇ ಬದಲಾವಣೆ, ಅಭಿವೃದ್ಧಿ ಕೆಲಸ ಶುರು ಮಾಡುವ ಮೊದಲು, ಅವನು ಜನರಿಗೆ ಕೇಳಿ ಪರ್ಮಿಷನ್ ಪಡೆಯಲೇಬೇಕು.

ಪ್ರಜಾಕೀಯದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ: ಜನರ ಸಹಿ, ಜನರ ಮಾತು

ಪ್ರಜಾಕೀಯದಲ್ಲಿ ಎಂಎಲ್ಎ ಟಿಕೆಟ್ ಸಿಗೋದು ಸುಲಭವಲ್ಲ. ಅಭ್ಯರ್ಥಿಗಳು ಉಪೇಂದ್ರ ಸರ್ ಹತ್ರ ಟಿಕೆಟ್ ಕೇಳಿದ್ರೆ, ಅವರು ಜನರ ಹತ್ರ ಹೋಗಿ ಕೇಳಿ ಅಂತಾರೆ. ಅಂದ್ರೆ, ಅಭ್ಯರ್ಥಿಗಳು ತಮ್ಮ ಊರಿನ ಮನೆ ಮನೆಗೂ ಹೋಗಿ, ತಾವು ಎಂಎಲ್ಎ ಆದ್ರೆ ಏನು ಮಾಡ್ತೀವಿ ಅನ್ನೋದನ್ನ ಎಕ್ಸ್‌ಪ್ಲೇನ್ ಮಾಡಬೇಕು. ಜನರಿಗೆ ಇಷ್ಟ ಆದ್ರೆ, ಫಾರ್ಮ್‌ಗೆ ಸೈನ್ ಮಾಡಿಸಬೇಕು. ಇಲ್ಲಿ ಪ್ರಚಾರ ಮಾಡೋ ಹಾಗಿಲ್ಲ, ದುಡ್ಡು ಕೊಟ್ಟು ಸೈನ್ ಮಾಡಿಸೋ ಹಾಗಿಲ್ಲ, ಫೇಕ್ ಸಿಗ್ನೇಚರ್ ಮಾಡುವ ಹಾಗಿಲ್ಲ. ಸಂಪೂರ್ಣ ಪ್ರಾಮಾಣಿಕವಾಗಿ ಜನರ ಮನವೊಲಿಸಬೇಕು.

ಆಯ್ಕೆಯಾದ ಎಂಎಲ್ಎಗಳ ಜವಾಬ್ದಾರಿ: ಪ್ರಜೆಗಳೇ ಬಾಸ್

ಪ್ರಜಾಕೀಯದಲ್ಲಿ ಒಬ್ಬ ಎಂಎಲ್ಎ ಗೆದ್ದರೆ, ಅವನು ಐದು ವರ್ಷ ರಾಜನ ಹಾಗೆ ಇರಲ್ಲ. ನಮ್ಮೂರಲ್ಲಿ ಯಾವುದೇ ಡೆವಲಪ್ಮೆಂಟ್ ಕೆಲಸ ಶುರು ಮಾಡಬೇಕಂದ್ರೆ, ಪ್ರತಿ ಸತಿನೂ ಪಬ್ಲಿಕ್ ಹತ್ರ ತಿಳಿಸಿ, ಅವರ ಪರ್ಮಿಷನ್ ಪಡೆಯಲೇಬೇಕು. ಉದಾಹರಣೆಗೆ, ರೋಡ್ ಹಾಕಿಸೋ ಪ್ರಾಜೆಕ್ಟ್ ಬಂದಾಗ, ಯಾವ ಕಾಂಟ್ರಾಕ್ಟರ್‌ಗೆ ಕೆಲಸ ಕೊಡಬೇಕು ಅಂತ ಜನರಿಗೆ ಕೇಳಿ, ಅವರ ಒಪಿನಿಯನ್ ತಗೋಬೇಕು.

ಜನರಿಗೆ ಬೇಕಾಗಿರೋದು ಮಾಡದಿದ್ರೆ, ಜನರೇ ಅವನನ್ನು ಕಿತ್ತುಹಾಕುವ ಅಧಿಕಾರ ಹೊಂದಿರುತ್ತಾರೆ. ಪ್ರಜೆಗಳೇ ಇಲ್ಲಿ ಅಲ್ಟಿಮೇಟ್ ಬಾಸ್.

ರೈಟ್ ಟು ರಿಕಾಲ್: ಪ್ರಜಾಕೀಯದ ನಿಜವಾದ ಶಕ್ತಿ

ಪ್ರಜಾಕೀಯದಲ್ಲಿ ತುಂಬಾ ಬ್ಯೂಟಿಫುಲ್ ಥಿಂಗ್ ಅಂದ್ರೆ ‘ರೈಟ್ ಟು ರಿಕಾಲ್’ ಅಥವಾ ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕು. ಸಿಸ್ಟಮ್‌ನಲ್ಲಿ ಯಾರೇ ಲೀಡರ್ ಇದ್ದರೂ, ಅವರನ್ನು ಮೇಲೆ ಏರಿಸೋ ಅಧಿಕಾರ ಮತ್ತು ಕೆಳಗೆ ಇಳಿಸೋ ಅಧಿಕಾರ ಜನರ ಕೈಯಲ್ಲಿ ಇರಬೇಕು ಅನ್ನೋದು ಪ್ರಜಾಕೀಯದ ಮೂಲ ಮಂತ್ರ. ಪಕ್ಷದವರು ಆರು ತಿಂಗಳಿಗೆ ಒಮ್ಮೆ ಸೀಕ್ರೆಟ್ ಸರ್ವೇ ನಡೆಸಿ, ಎಂಎಲ್ಎ ಕೆಲಸ ಹೇಗಿದೆ ಅಂತ ಜನರ ಬಳಿ ರಿವ್ಯೂ ಕೇಳ್ತಾರೆ. ನೆಗೆಟಿವ್ ರಿವ್ಯೂ ಬಂದ್ರೆ, ಮುಲಾಜಿಲ್ಲದೆ ಆ ಎಂಎಲ್ಎನ ಸೀಟಿನಿಂದ ಕಿತ್ತುಹಾಕ್ತಾರೆ. ಇದು ನಿಜವಾದ ಪ್ರಜಾಪ್ರಭುತ್ವ.

ತೀರ್ಮಾನ: ಒಟ್ಟಿನಲ್ಲಿ, ಪ್ರಜಾಕೀಯ ಅಂದ್ರೆ ಬರೀ ಒಂದು ಪಾರ್ಟಿಗೆ ವೋಟ್ ಹಾಕಿ ಸುಮ್ಮನಿರೋದಲ್ಲ. ಅದರಲ್ಲಿ ಪಬ್ಲಿಕ್ ಆಕ್ಟಿವ್ ಆಗಿ ಗವರ್ನಮೆಂಟ್ ಪಾಲಿಸೀಸ್‌ಗಳಲ್ಲಿ, ಪಾಲಿಟಿಕ್ಸ್‌ನಲ್ಲಿ ಇನ್‌ವಾಲ್ವ್ ಆಗಬೇಕು.

ನೀವೇ ವೋಟ್ ಹಾಕಿ ಆಯ್ಕೆ ಮಾಡಿದ ಲೀಡರ್ ಕರೆಕ್ಟ್ ಆಗಿ ಕೆಲಸ ಮಾಡ್ತಿದ್ದಾನಾ, ನಿಮ್ಮ ಅಭಿಪ್ರಾಯ ಕೇಳ್ತಿದ್ದಾನಾ ಅಂತ ನೋಡೋದು ನಿಮ್ಮ ಜವಾಬ್ದಾರಿ. ನಿಮ್ಮ ವೋಟಿನ ಬೆಲೆ ಮತ್ತು ರಾಜಕೀಯದ ಮಹತ್ವವನ್ನು ಅರ್ಥ ಮಾಡಿಕೊಂಡು ಪಾಲ್ಗೊಂಡರೆ ಮಾತ್ರ ಪ್ರಜಾಕೀಯ ಅನ್ನುವ ಕಾನ್ಸೆಪ್ಟ್ ಯಶಸ್ವಿಯಾಗಲು ಸಾಧ್ಯ. ಇದು ಉಪೇಂದ್ರರು ಜನರಿಗೆ ತೋರಿಸಿದ ಹೊಸ ದಾರಿ.

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment