SM Krishna Death: ಎಲ್ಲರಿಗೂ ನಮಸ್ಕಾರ, ಇವತ್ತಿನಿಂದ ಮೂರು ದಿನ ಶೋಕಾಚರಣೆಯನ್ನ ಘೋಷಣೆ ಮಾಡಿದ್ದಾರೆ ಸರ್ಕಾರ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನ ಅರ್ಧ ಮಟ್ಟಕ್ಕೆ ಹಾರಿಸಬೇಕು ಅನ್ನುವಂತಹ ಒಂದು ಸೂಚನೆ ಸರ್ಕಾರದಿಂದ ಬಂದಿದೆ ಈಗ ಸರ್ಕಾರಿ ಕಟ್ಟಡಗಳ ಮೇಲೆ ಧ್ವಜವನ್ನ ಅರ್ಧ ಮಟ್ಟದಲ್ಲಿ ಹಾರಿಸಬೇಕು ಮೂರು ದಿನ ಶೋಕಾಚರಣೆ ಇರುತ್ತೆ ಅನ್ನುವಂತದ್ದು ಹೇಳಿದ್ದಾರೆ ಡಿಸೆಂಬರ್ 12 ರವರೆಗೆ ಇವತ್ತಿನಿಂದ 10, 11, 12 ಈ ಮೂರು ದಿನಗಳ ಕಾಲ ಶೋಕಾಚರಣೆಯನ್ನ ಘೋಷಣೆ ಮಾಡಿದ್ದಾರೆ.
ಮುಂದಿನ 3 ದಿನ ರಾಜ್ಯದಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಬೇಕು ಅನ್ನುವಂತದ್ದರ ಬಗ್ಗೆ ಅಧಿಸೂಚನೆಯನ್ನ ಕೂಡ ಸರ್ಕಾರ ಹೊರಡಿಸಿದೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರದಿಂದ ಹೊರಡಿಸಿರುವಂತಹ ಅಧಿಸೂಚನೆ ಎಸ್ ಎಂ ಕೃಷ್ಣ ಅವರ ಒಂದು ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳ ಮೂಲಕನೇ ಆಗಬೇಕು ಅನ್ನುವಂತದ್ದರ ಬಗ್ಗೆ ಅಧಿಸೂಚನೆಯನ್ನ ಹೊರಡಿಸಿದೆ ಯಾಕಂದ್ರೆ ಸಹಜ ಒಬ್ಬ ಮಾಜಿ ಮುಖ್ಯಮಂತ್ರಿ ಒಬ್ಬ ಮಾಜಿ ಕೇಂದ್ರದ ಮಂತ್ರಿಯಾಗಿದ್ದಂತವರು ಜೊತೆಗೆ ರಾಜ್ಯಪಾಲರು ಕೂಡ ಆಗಿದ್ದಂತವರು ಅಪಾರ ಸೇವೆಯನ್ನು ಸಲ್ಲಿಸಿರುವಂತಹ ಒಬ್ಬ ಜನಪರ ನಾಯಕ ಎಸ್ ಎಂ ಕೃಷ್ಣ ಅವರಿಗೆ ಸಲ್ಲಲೇ ಬೇಕಾದಂತಹ ಗೌರವ. ಹಾಗಾಗಿ ಈಗ ರಾಜ್ಯ ಸರ್ಕಾರ ಕೂಡ ಘೋಷಣೆಯನ್ನ ಮಾಡಿದೆ.
ಮೂರು ದಿನಗಳ ಕಾಲ ಶೋಕಾಚರಣೆ ಇರುತ್ತೆ ಸರ್ಕಾರಿ ಕಾರ್ಯಕ್ರಮಗಳು ಯಾವುದು ಕೂಡ ನಡೆಯುವುದಿಲ್ಲ ಜೊತೆಗೆ ಯಾವುದೇ ಮನರಂಜನಾ ಕಾರ್ಯಕ್ರಮಗಳು ಕೂಡ ನಡೆಯುವುದಿಲ್ಲ. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮಗಳು ಮನೋರಂಜನಾ ಕಾರ್ಯಕ್ರಮಗಳನ್ನ ನಡೆಸಬೇಡಿ ಸರ್ಕಾರಿ ಕಾರ್ಯಕ್ರಮಗಳು ಯಾವುದು ಕೂಡ ಇರೋದು ಬೇಡ ಅನ್ನುವಂತದ್ದನ್ನ ಈಗಾಗಲೇ ಸರ್ಕಾರ ಅಧಿಸೂಚನೆಯನ್ನ ಹೊಡಿಸಿದೆ.
ಇದನ್ನೂ ಓದಿ: Pan Card 2.0 Update.!





